ಕ್ಷೀರ ಸಾಗರ

ನೊರೆನೊರೆಯಾದ ಮೋಡಗಳ ಕ್ಷೀರಸಾಗರ
ಥೇಟ್ ಕ್ಯಾಲಂಡರಿನ ಚಿತ್ರದಂತೆಯೇ
ದೇವದಾನವರ ಕಡಲಮಂಥನ ಪನ್ನಗಶಯನ ವಿಲಾಸಿ ವಿಷ್ಣು
ಕಾಲೊತ್ತುವ ಆಭರಣ ಪ್ರಿಯೆ ಲಕ್ಷ್ಮಿ-
ನೋಡಲು ಸುಸ್ತಾಗಿ ಕಲಾಕಾರನನು ಬೈಯ್ದು ಹಿಂದೊರಗಿ ನಿದ್ರಾವಶ.
ವಿಷವುಂಡ ನೀಲಕಂಠನ ತೇಲುಗಣ್ಣು ಮೆಳ್ಳಗಣ್ಣು
ಜೀವನೆತ್ತಿಯ ಮೇಲೆ ಅದರೊಳಗೆ
ಗಂಗೆ ನೋರೂಡಿಸಿ ಬದುಕಿಸಿ ಮುಗುಳ್ನಗೆ-
ಸಪ್ತಹೆಡೆಯ ವಿಷಾನಿಲ ಸುತ್ತೆಲ್ಲ
ಹದಿನಾಲ್ಕು ಕಣ್ಣುಗಳಿಗೆ ರತ್ನ ಪಚ್ಚೆಯ ಸಿಂಗಾರ
ನೂರಿಪ್ಪತ್ತು ಹರಳಿನ ವಜ್ರದೆಳೆ
ಮಣಿಮಾಣಿಕ್ಯದ ಭಾರವಾದ ಎದೆ, ಸೊಕ್ಕಿದ ಮೈ
ಲಕ್ಷ್ಮಿಯ ಮೃದು ಸ್ಪರ್ಶ ವಿಷ್ಣುವಿನ ಐಶಾರಾಮಿ ನಗೆ-
ಮಗಳನ್ನೇ ಕೆಡವಿದ ಬ್ರಹ್ಮ ಪರಾರಿ
ಗುಡಿಗುಂಡಾರ ಮಠಗಳಿಲ್ಲದೆ ಎಲ್ಲಿದ್ದಾನೋ
ಆದರೂ ಇದು ಬ್ರಹ್ಮನ ಸೃಷ್ಟಿ;
ಸರಸ್ವತಿ ಗೋಜಲಿಗೆ ಬಿದ್ದು ವೀಣೆ ಹಿಡಿದು
ತಂತಿ ಮೀಟಿದರೆ ಅಪಸ್ವರ ಮತ್ತೆ ಮತ್ತೆ
ತಂತಿ ಬಿಗಿದು ಲಯಹೊಂದಿಸಲು ಪುಸ್ತಕ ತಡಕಾಡಿ
ವೀಣಾ ಪಾಣಿಗೆ ಕಣ್ಣುತೇವ
ಹೊಯ್ದಾಟ, ಅಲುಗಾಟ, ಕುಲಕಾಟ-
ಅರೆನಿದ್ರೆ-
ಮತ್ತೆ ಕಿಡಕಿ, ಮತ್ತದೇ ಕ್ಷೀರಸಾಗರ
ನೊರೆ ನೊರೆ
ಅರೆರೆ! ವೃಷಭಾವತಿಯಂತಿದೆಯಲ್ಲ, ಕಸಕಡ್ಡಿ ಕಚಡ-
ಕಣ್ಣು ಒರೆಸಿಕೊಂಡಷ್ಟೂ ಕಂಡುಬರುವ
ಫ್ಯಾಕ್ಟರಿಯ ಕೊಳೆಯ ನೊರೆ ಥೂ, ಥೂ
ದಟ್ಟ ಹೊಗೆಯ ಸದ್ದಿಲ್ಲದ ಕಡಲಿಗೆ ರಾಜಕೀಯ ಕಡಗೋಲು
ಒಂದೆಡೆ ರಾಜಕೀಯ ಮತ್ತೊಂದೆಡೆ ನಕ್ಸಲ್ ಭಯೋತ್ಪಾದಕರು
ಮಂಥಿಸಿದಷ್ಟು ಮಂಥಿಸಿದಷ್ಟು ಕೊಳಕೆದ್ದು ಗಬ್ಬುವಾಸನೆ.
ರಕ್ತ ಸಾವು ನೋವುಗಳ ಚೀತ್ಕಾರ
ಹೊಯ್ದಾಟ, ಅಲುಗಾಟ, ಕುಲುಕಾಟ-
ಮತ್ತದೇ ಕಿಡಕಿ ಮತ್ತದೇ ನೊರೆಯ ಕ್ಷೀರಸಾಗರ
ಮೇಲೆ ಇಡಿಯಾಗಿ ಫಳಫಳಿಸುವ ಸೂರ್ಯ.

ಕ್ಯಾಲೆಂಡರಿನ ಆಟೋಟಕೆ ಕಡಿವಾಣ ಹಾಕಿ
ಹೈವಾನಾದದ್ದು; ದುರುಳರಿಗೆ ಮಟ್ಟಹಾಕಲು.
ಎಲ್ಲೆಡೆ ಬಿಸಿವಾತಾವರಣ ಬಿಸಿಯುಸಿರೇರಿಸಿ
ಎದೆಗೊದ್ದು ಕೆಡುವುತ್ತಿರುವುದು
ಮಾಯಾಲೋಕದ ಮಂಥನ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬನ್ನಿ ಕನಸುಗಳೆ ಬನ್ನಿ
Next post ಹೊಸಗಾದೆಗಳು

ಸಣ್ಣ ಕತೆ

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

cheap jordans|wholesale air max|wholesale jordans|wholesale jewelry|wholesale jerseys